ಆರೋಪಿಗಳನ್ನು ಗೋಕಾಕ ತಾಲ್ಲೂಕು ಹಡಗಿನಾಳದ ಭೀಮಶಿ ಹುಲ್ಲೋಳಿ (24), ಬೆಣಚಿನಮರಡಿಯ ಸುರೇಶ ಕಡಬಿ (25), ಉದಗಟ್ಟಿಯ ಆನಂದ ಒಡೆಯರ (28) ಮತ್ತು ಮೆಹಬೂಬ್ ಅಕ್ಕಿವಾಟ (23) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಉದ್ಯಮಬಾಗ್, ಮಾಳಮಾರುತಿ, ಟಿಳಕವಾಡಿ ಮತ್ತು ಶಹಾಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ವಿಕ್ರ ಅಮಟೆ ತಿಳಿಸಿದ್ದಾರೆ.