‘ಕಲ್ಪನಾತೀತ ಮಾರಕ ಕೊರೊನಾದಿಂದಾಗಿ ದೇಶವು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ಎಂದೂ ಕೇಳರಿಯದ ಕಷ್ಟದ ದಿನಗಳನ್ನು ಎದುರಿಸುವಂಥ ದಿನಗಳು ಬಂದಿವೆ. ದುಡಿಯುವ ಕೈಗಳಿಗೆ ಆಹಾರ ಸೇರಿ ನೂರಾರು ಸಮಸ್ಯೆಗಳು ಎದುರಾಗಿವೆ. ಇದನ್ನುಗಮನದಲ್ಲಿಟ್ಟುಕೊಂಟು ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಪ್ರಧಾನಿ ಆರ್ಥಿಕ ಪ್ಯಾಕೇಜ್ ಪ್ರಕಟಿಸಿರುವುದು ಸಂದರ್ಭೋಚಿತವಾಗಿದೆ’ ಎಂದಿದ್ದಾರೆ.