<p><strong>ಬೆಳಗಾವಿ:</strong> ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್ಜಿಬಿಐಟಿಯಲ್ಲಿ 2020–21ನೇ ಸಾಲಿನ ಬಿ.ಇ. ಪ್ರಥಮ ವರ್ಷದ ಆನ್ಲೈನ್ ತರಗತಿಗಳು ಪ್ರಾರಂಭವಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರದಿಂದ ಡಿ. 21ರವರೆಗೆ ಹಮ್ಮಿಕೊಂಡಿರುವ ವಿವಿಧ ವಿಷಯಗಳ ಮಾಹಿತಿ ನೀಡುವ ಹಾಗೂ ವಿಭಾಗಗಳ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.</p>.<p>ಮುಖ್ಯ ಅತಿಥಿಯಾಗಿದ್ದ ಹಾರೂಗೇರಿಯ ಜಂಬಗಿ ಸ್ಮಾರಕ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಲಕ್ಷ್ಮಣ ಜಂಬಗಿ, ‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ದಿನದಲ್ಲಿ ಕನಿಷ್ಠ 5 ನಿಮಿಷವನ್ನಾದರೂ ಧ್ಯಾನಕ್ಕೆ ಮೀಸಲಿಡಬೇಕು. ಕೋವಿಡ್-19ನಿಂದಾಗಿ ಜೀವನಶೈಲಿಯೇ ಬದಲಾಗಿದ್ದು, ಸಾಕಷ್ಟು ಪಾಠ ಕಲಿಸಿದೆ. ಆದ್ದರಿಂದ, ಎಂಥದೇ ಪರಿಸ್ಥಿಯಲ್ಲಿಯೂ ಜೀವನ ಸಾಗಿಸುವುದನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>‘ಎಷ್ಟೇ ಅಭಿವೃದ್ಧಿ ಹೊಂದಿದರೂ, ಎಲ್ಲೇ ಇದ್ದರೂ ಮಾತೃ ಸಂಸ್ಥೆ ಮತ್ತು ಮಾತೃ ಭಾಷೆ ಮರೆಯಬಾರದು’ ಎಂದರು.</p>.<p>ಪ್ರಾಚಾರ್ಯ ಡಾ.ಸಿದರಾಮಪ್ಪ ವಿ. ಇಟ್ಟಿ, ‘ಹಿಂದೆ ಕಾಲೇಜಿನ ಕ್ಯಾಂಪಸ್ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಇಂದು ಶಿಕ್ಷಣಕ್ಕೆ ಮೊಬೈಲ್ ಬಳಕೆ ಅವಶ್ಯವಾಗಿದೆ. ಆದರೆ, ಬಳಕೆ ಇತಿಮಿತಿಯಲ್ಲಿರಬೇಕು’ ಎಂದು ತಿಳಿಸಿದರು.</p>.<p>ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ, ‘ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>ಅತಿಥಿಯಾಗಿದ್ದ ಪೂಜಾ ಹಿರೇಕೋಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಹೇಂದ್ರ ಬಿರಾದಾರ, ಶ್ರದ್ಧಾ ಮತ್ತಿಕಟ್ಟಿ, ಮಹೇಶ ಈಶ್ವರಪ್ಪಗೋಳ, ಅಭಿನಂದನ ನಸಾಲಪುರ ಮಾತನಾಡಿದರು.</p>.<p>ಸಿವಿಲ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಹರ್ಷಿತಾ ಹಾಗೂ ಮೇಘಾ ಸ್ವಾಗತ ಗೀತೆ ಹಾಡಿದರು. ಸಂಯೋಜನಾಧಿಕಾರಿ ಪ್ರೊ.ವಿವೇಕಾನಂದ ಖೋತ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಗಲಗಲಿ ವಿಭಾಗಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಮಂಜುನಾಥ ಶರಣಪ್ಪನವರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್ಜಿಬಿಐಟಿಯಲ್ಲಿ 2020–21ನೇ ಸಾಲಿನ ಬಿ.ಇ. ಪ್ರಥಮ ವರ್ಷದ ಆನ್ಲೈನ್ ತರಗತಿಗಳು ಪ್ರಾರಂಭವಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರದಿಂದ ಡಿ. 21ರವರೆಗೆ ಹಮ್ಮಿಕೊಂಡಿರುವ ವಿವಿಧ ವಿಷಯಗಳ ಮಾಹಿತಿ ನೀಡುವ ಹಾಗೂ ವಿಭಾಗಗಳ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.</p>.<p>ಮುಖ್ಯ ಅತಿಥಿಯಾಗಿದ್ದ ಹಾರೂಗೇರಿಯ ಜಂಬಗಿ ಸ್ಮಾರಕ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಲಕ್ಷ್ಮಣ ಜಂಬಗಿ, ‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ದಿನದಲ್ಲಿ ಕನಿಷ್ಠ 5 ನಿಮಿಷವನ್ನಾದರೂ ಧ್ಯಾನಕ್ಕೆ ಮೀಸಲಿಡಬೇಕು. ಕೋವಿಡ್-19ನಿಂದಾಗಿ ಜೀವನಶೈಲಿಯೇ ಬದಲಾಗಿದ್ದು, ಸಾಕಷ್ಟು ಪಾಠ ಕಲಿಸಿದೆ. ಆದ್ದರಿಂದ, ಎಂಥದೇ ಪರಿಸ್ಥಿಯಲ್ಲಿಯೂ ಜೀವನ ಸಾಗಿಸುವುದನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>‘ಎಷ್ಟೇ ಅಭಿವೃದ್ಧಿ ಹೊಂದಿದರೂ, ಎಲ್ಲೇ ಇದ್ದರೂ ಮಾತೃ ಸಂಸ್ಥೆ ಮತ್ತು ಮಾತೃ ಭಾಷೆ ಮರೆಯಬಾರದು’ ಎಂದರು.</p>.<p>ಪ್ರಾಚಾರ್ಯ ಡಾ.ಸಿದರಾಮಪ್ಪ ವಿ. ಇಟ್ಟಿ, ‘ಹಿಂದೆ ಕಾಲೇಜಿನ ಕ್ಯಾಂಪಸ್ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಇಂದು ಶಿಕ್ಷಣಕ್ಕೆ ಮೊಬೈಲ್ ಬಳಕೆ ಅವಶ್ಯವಾಗಿದೆ. ಆದರೆ, ಬಳಕೆ ಇತಿಮಿತಿಯಲ್ಲಿರಬೇಕು’ ಎಂದು ತಿಳಿಸಿದರು.</p>.<p>ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ, ‘ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>ಅತಿಥಿಯಾಗಿದ್ದ ಪೂಜಾ ಹಿರೇಕೋಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಹೇಂದ್ರ ಬಿರಾದಾರ, ಶ್ರದ್ಧಾ ಮತ್ತಿಕಟ್ಟಿ, ಮಹೇಶ ಈಶ್ವರಪ್ಪಗೋಳ, ಅಭಿನಂದನ ನಸಾಲಪುರ ಮಾತನಾಡಿದರು.</p>.<p>ಸಿವಿಲ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಹರ್ಷಿತಾ ಹಾಗೂ ಮೇಘಾ ಸ್ವಾಗತ ಗೀತೆ ಹಾಡಿದರು. ಸಂಯೋಜನಾಧಿಕಾರಿ ಪ್ರೊ.ವಿವೇಕಾನಂದ ಖೋತ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಗಲಗಲಿ ವಿಭಾಗಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಮಂಜುನಾಥ ಶರಣಪ್ಪನವರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>