‘ಮಾನವೀಯತೆಯುಸಂವಿಧಾನದ ಮೂಲ ಮಂತ್ರವಾಗಿದೆ. ಸಂವಿಧಾನವೆಂದರೆ ವಿಧಿ ಹಾಗೂ ಉಪವಿಧಿಗಳ ಲೆಕ್ಕವಲ್ಲ. ರಾಜ್ಯಾಧಿಕಾರದ ನೀತಿ ನಿರೂಪಣೆಯೊಂದಿಗೆ ಸಂವಿಧಾನವು ಐತಿಹಾಸಿಕವಾಗಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಪ್ರಜಾಪ್ರಭುತ್ವದ ಮೂಲ ಆಶಯದಂತೆ ರಾಜ್ಯಾಧಿಕಾರದಲ್ಲಿ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯವನ್ನು ಸಂವಿಧಾನದ ಮೂಲಕ ಜಾರಿಗೆ ತರಲಾಗಿದೆ. ದೇಶದ ಎಲ್ಲಾ ಜನರ ಆಶಯವನ್ನು ಪ್ರತಿನಿಧಿಸುವ ಪವಿತ್ರ ಗ್ರಂಥವಾಗಿದೆ. ಜನಸಾಮಾನ್ಯರಿಗೆ ಸಂವಿಧಾನದತ್ತ ಅವಕಾಶಗಳನ್ನು ಮನದಟ್ಟು ಮಾಡಿಸುವ ರೀತಿಯಲ್ಲಿ ನಾಟಕ ರೂಪಿಸಲು ಶ್ರಮಿಸಲಾಗುತ್ತಿದೆ’ ಎಂದು ನಾಟಕದ ನಿರ್ದೇಶಕ ಬಾಬಾಸಾಹೇಬ ಕಾಂಬ್ಳೆ ಹೇಳಿದರು.