ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದ ವೇಳೆ ಸಾವಿಗೀಡಾದ ಮಾಡಳ್ಳಿ ಹಳ್ಳಿಕೇರಿ ಮನೆಗೆ ರಾಹುಲ್‌ ಗಾಂಧಿ ಭೇಟಿ

Last Updated 10 ಮೇ 2018, 9:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಕ್ಷದ ಅಭ್ಯರ್ಥಿ ಪರ‌ ಪ್ರಚಾರ ಮಾಡುವ ವೇಳೆ ಚಕ್ಕಡಿ ಮೇಲಿಂದ ಬಿದ್ದು ಸಾವಿಗೀಡಾದ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ‌ಎಚ್.ವಿ. ಮಾಡಳ್ಳಿ ಅವರ ಹಳ್ಳಿಕೇರಿ ಮನೆಗೆ ಎಐಸಿಸಿ ಅಧ್ಯಕ್ಷ ‌ರಾಹುಲ್‌ ಗಾಂಧಿ ‌ಭೇಟಿ ನೀಡಿ ಕುಟುಂಬ ‌ಸದಸ್ಯರಿಗೆ ಸಾಂತ್ವನ ಹೇಳಿದರು.

ಅಣ್ಣಿಗೇರಿ ‌ತಾಲ್ಲೂಕಿನ ಹಳ್ಳಿಕೇರಿ ಗ್ರಾಮಕ್ಕೆ ರಾಹುಲ್ ಭೇಟಿ‌ ನೀಡಿದ ವೇಳೆ ಎಐಸಿಸಿ‌ ಕರ್ನಾಟಕ ‌ಉಸ್ತುವಾರಿ‌ಕೆ ಕೆ.ಸಿ. ವೇಣುಗೋಪಾಲ್, ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ‌ ಡಿ.ಆರ್. ಪಾಟೀಲ, ಪಕ್ಷದ ಮುಖಂಡ ವೀರಣ್ಣ ‌ಮತ್ತಿಕಟ್ಟಿ ಇದ್ದರು.

ಮಾಡಳ್ಳಿ ಪುತ್ರ ವೆಂಕಟೇಶ್ ಅವರೊಂದಿಗೆ ‌ಮಾತನಾಡಿದ ರಾಹುಲ್,  ನಿಮ್ಮ ತಂದೆ ಶಿಸ್ತಿನ ಸಿಪಾಯಿಯಂತೆ ಪಕ್ಷಕ್ಕೆ ದುಡಿದಿದ್ದಾರೆ. ಅವರ ಸಾವು ಪಕ್ಷಕ್ಕೆ ಅಪಾರ ನಷ್ಟ ಉಂಟು ಮಾಡಿದೆ ಎಂದರು.

ಪಕ್ಷದಲ್ಲಿ ‌ಕುಟುಂಬದವರಿಗೆ ಉತ್ತಮ ಸ್ಥಾನ ನೀಡಲಾಗುವುದು ಎಂದು ಭರವಸೆ ‌ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT