ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ಅಂಬೇಡ್ಕರ್ ಅವರ ಉಬ್ಬುಶಿಲ್ಪ ರಚಿಸಿ, ರೈಲ್ವೆ ನಿಲ್ದಾಣದೊಳಗೆ ಇರಿಸಲಾಗಿದೆ. ಅದನ್ನು ಮುಂಭಾಗದಲ್ಲಿ ಅಳವಡಿಸಬೇಕೆಂದು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದಿನಕ್ಕೊಂದು ಕಾರಣ ನೀಡುತ್ತ, ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.