ಈ ಹಂತದಲ್ಲಿ ಪೊಲೀಸರು ಹಾಗೂ ಉದ್ರಿಕ್ತರ ಜೊತೆ ವಾಗ್ವಾದ ನಡೆಯಿತು. ಅಲ್ಲಿಂದ ಹೊರಬಂದ ಉದ್ರಿಕ್ತರು, ರಸ್ತೆಯ ಮೇಲೆ ಹೊರಟಿದ್ದ 3 ಸಾರಿಗೆ ಬಸ್ಗಳತ್ತ ಹಾಗೂ ಒಂದು ಕಾರಿನತ್ತ ಕಲ್ಲು ತೂರಿದರು. ಸಮೀಪದಲ್ಲಿಯೇ ಇದ್ದ ಬಸ್ ನಿಲ್ದಾಣದ ಗಾಜುಗಳಿಗೂ ಕಲ್ಲು ತೂರಿದರು. ಘಟನೆಯಿಂದ ವಿಚಲಿತರಾದ ಅಕ್ಕಪಕ್ಕದ ವ್ಯಾಪಾರಸ್ಥರು, ಅಂಗಡಿಗಳನ್ನು ಬಂದ್ ಮಾಡಿದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಉದ್ರಿಕ್ತರನ್ನು ಚದುರಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.