ಬೆಳಗಾವಿ: ಕಿರಿಯ ಅಧಿಕಾರಿಯ ಬಾಕಿ ಉಳಿದಿರುವ ವೈದ್ಯಕೀಯ ಮರುಪಾವತಿ ಬಿಲ್ಗಳು, ಇತರ ಭತ್ಯೆಗಳ ಬಿಲ್ಗಳನ್ನು ಪಾಸ್ ಮಾಡಲು ₹ 10,000 ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್ ಎಂಜಿನಿಯರ್ ಕಚೇರಿಯ ಸೂಪರಿಟೆಂಡೆಂಟ್ ರಮೇಶ ಶಂಕರ ದೇವಗೇಕರ ಅವರನ್ನು ಎಸಿಬಿ ಅಧಿಕಾರಿಗಳು ಶನಿವಾರ ಬಲೆಗೆ ಕೆಡವಿದ್ದಾರೆ.