‘ಸ್ಥಳೀಯ ಅಭ್ಯರ್ಥಿಗಳನ್ನಲ್ಲ, ನನ್ನನ್ನು ನೋಡಿ ವೋಟ್ ಹಾಕಿ. ನನ್ನ ಸರ್ಕಾರ ಇನ್ನೂ ಮೂರುವರೆ ವರ್ಷ ಇರಬೇಕಾದರೆ, ಈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ. ವೀರಶೈವ– ಲಿಂಗಾಯತ ಮತದಾರರ ಒಂದೂ ಮತ ಬೇರೆ ಕಡೆ ಹೋಗಬಾರದು’ ಎಂದು ಬಹಿರಂಗ ಸಭೆಯಲ್ಲಿ ಕರೆಕೊಟ್ಟರು. ಅವರ ಈ ಮಾತಿನಿಂದ ಚುನಾವಣಾ ಲೆಕ್ಕಾಚಾರವೇ ಬದಲಾಗಿ ಹೋಯಿತು.