<p><strong>ಚನ್ನಮ್ಮನ ಕಿತ್ತೂರು:</strong> ತಾಲ್ಲೂಕಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ (ರಾಣಿ ಶುಗರ್) ಖಾನಾಪುರದ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಹುನ್ನಾರ ಆಡಳಿತ ಮಂಡಳಿಯಿಂದ ನಡೆಯುತ್ತಿದೆ ಎಂದು ರೈತಸಂಘ ಹಾಗೂ ಹಸಿರುಸೇನೆ ಧುರೀಣ ಮಡಿವಾಳಯ್ಯ ಹಿರೇಮಠ ಆರೋಪಿಸಿದರು.</p>.<p>ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಣಿ ಶುಗರ್ ನಲ್ಲಿ ಈಗ ನಡೆದಿರುವ ಚಟುವಟಿಕೆಗಳನ್ನು ಗಮನಿಸಿದರೆ ಇಂಥದ್ದೊಂದು ಅನುಮಾನ ಕಾರ್ಖಾನೆ ಸದಸ್ಯರನ್ನು ಕಾಡುತ್ತಿದೆ ಎಂದರು.</p>.<p>ಲೈಲಾ ಶುಗರ್ ಕಾರ್ಖಾನೆಯ ಅಧಿಕಾರಿಯೊಬ್ಬರನ್ನು ತಂದು ರಾಣಿ ಶುಗರ್ ಗೆ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ನೇಮಕ ಮಾಡಲಾಗಿದೆ. ಅವರಿಗೆ ಸಂಬಂಧಿಸಿದ ಸಹಕಾರ ಸಂಘದಿಂದ ರೂ. 8 ಕೋಟಿ ಸಾಲ ಪಡೆಯಲಾಗಿದೆ. ಇವೆಲ್ಲ ಘಟನೆಗಳು ಲೈಲಾ ಶುಗರ್ ದಂತೆ ಗುತ್ತಿಗೆಗೆ ನೀಡುವ ಪೂರ್ವ ಸಿದ್ಧತೆಗಳಿವು ಎಂದು ಅನಿಸುತ್ತಿದೆ ಎಂದರು.</p>.<p>ರಾಣಿ ಶುಗರ್ ಕಾರ್ಖಾನೆ ಮೇಲೆ ರೂ. 120 ಕೋಟಿ ಸಾಲವಿದೆ. ಇಳುವರಿಯಲ್ಲೂ ಕಡಿಮೆ ತೋರಿಸಿ ಕಾರ್ಖಾನೆಗೆ ಹಾನಿ ಮಾಡಲಾಗಿದೆ. ಮಾಡಿರುವ ಭ್ರಷ್ಟಾಚಾರ ಮುಚ್ಚಿಹಾಕಲು ಆಡಳಿತ ಮಂಡಳಿಯು ಗುತ್ತಿಗೆಗೆ ನೀಡಲು ಹೊರಟಿದೆ. ಇದರಲ್ಲಿ ಖಾನಾಪುರ ಮತ್ತು ಕಿತ್ತೂರು ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು:</strong> ತಾಲ್ಲೂಕಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ (ರಾಣಿ ಶುಗರ್) ಖಾನಾಪುರದ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಹುನ್ನಾರ ಆಡಳಿತ ಮಂಡಳಿಯಿಂದ ನಡೆಯುತ್ತಿದೆ ಎಂದು ರೈತಸಂಘ ಹಾಗೂ ಹಸಿರುಸೇನೆ ಧುರೀಣ ಮಡಿವಾಳಯ್ಯ ಹಿರೇಮಠ ಆರೋಪಿಸಿದರು.</p>.<p>ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಣಿ ಶುಗರ್ ನಲ್ಲಿ ಈಗ ನಡೆದಿರುವ ಚಟುವಟಿಕೆಗಳನ್ನು ಗಮನಿಸಿದರೆ ಇಂಥದ್ದೊಂದು ಅನುಮಾನ ಕಾರ್ಖಾನೆ ಸದಸ್ಯರನ್ನು ಕಾಡುತ್ತಿದೆ ಎಂದರು.</p>.<p>ಲೈಲಾ ಶುಗರ್ ಕಾರ್ಖಾನೆಯ ಅಧಿಕಾರಿಯೊಬ್ಬರನ್ನು ತಂದು ರಾಣಿ ಶುಗರ್ ಗೆ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ನೇಮಕ ಮಾಡಲಾಗಿದೆ. ಅವರಿಗೆ ಸಂಬಂಧಿಸಿದ ಸಹಕಾರ ಸಂಘದಿಂದ ರೂ. 8 ಕೋಟಿ ಸಾಲ ಪಡೆಯಲಾಗಿದೆ. ಇವೆಲ್ಲ ಘಟನೆಗಳು ಲೈಲಾ ಶುಗರ್ ದಂತೆ ಗುತ್ತಿಗೆಗೆ ನೀಡುವ ಪೂರ್ವ ಸಿದ್ಧತೆಗಳಿವು ಎಂದು ಅನಿಸುತ್ತಿದೆ ಎಂದರು.</p>.<p>ರಾಣಿ ಶುಗರ್ ಕಾರ್ಖಾನೆ ಮೇಲೆ ರೂ. 120 ಕೋಟಿ ಸಾಲವಿದೆ. ಇಳುವರಿಯಲ್ಲೂ ಕಡಿಮೆ ತೋರಿಸಿ ಕಾರ್ಖಾನೆಗೆ ಹಾನಿ ಮಾಡಲಾಗಿದೆ. ಮಾಡಿರುವ ಭ್ರಷ್ಟಾಚಾರ ಮುಚ್ಚಿಹಾಕಲು ಆಡಳಿತ ಮಂಡಳಿಯು ಗುತ್ತಿಗೆಗೆ ನೀಡಲು ಹೊರಟಿದೆ. ಇದರಲ್ಲಿ ಖಾನಾಪುರ ಮತ್ತು ಕಿತ್ತೂರು ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>