<p><strong>ಬೈಲಹೊಂಗಲ</strong>: ‘ಏಳನೇ ವೇತನ ಆಯೋಗದ ಹೆಚ್ಚುವರಿ ಹಣ ಮಂಜೂರಾದರೂ, ಕೆನರಾ ಬ್ಯಾಂಕ್ನ ಬೈಲಹೊಂಗಲ ಶಾಖೆಯವರು ನನ್ನ ಖಾತೆಗೆ ಜಮೆ ಮಾಡುತ್ತಿಲ್ಲ’ ಎಂದು ಪ್ರಭುನಗರದ ನಿವೃತ್ತ ಶಿಕ್ಷಕಿ ಅಕ್ಕುತಾಯಿ ಕೋರಿ ಆಪಾದಿಸಿದ್ದಾರೆ.</p>.<p>2025ರ ಮೇ 13ರಂದು ಬೆಂಗಳೂರಿನ ಕಚೇರಿಯಿಂದ ಅಕ್ಕುತಾಯಿ ಅವರಿಗೆ ಏಳನೇ ವೇತನ ಆಯೋಗದ ಹಣ ಮಂಜೂರಾಗಿದೆ. ಆದರೆ, ಬ್ಯಾಂಕ್ನವರು ‘ದಾಖಲೆಗಳ ಸಮಸ್ಯೆಯಿಂದ ನಿಮಗೆ ಹಣ ಸಂದಾಯವಾಗಿಲ್ಲ’ ಎನ್ನುತ್ತಿದ್ದಾರೆ.</p>.<p>ಇದರಿಂದಾಗಿ ಗೊಂದಲಕ್ಕೆ ಒಳಗಾದ ನಿವೃತ್ತ ಶಿಕ್ಷಕಿ, ನ್ಯಾಯ ಕೋರಿ ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು. </p>.<p>‘ಬ್ಯಾಂಕ್ ವ್ಯವಸ್ಥಾಪಕರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇಲಾಖೆಯಿಂದ ಎಲ್ಲ ದಾಖಲೆ ನೀಡಿದರೂ ಬ್ಯಾಂಕ್ನವರು ಅಲೆದಾಡಿಸುತ್ತಿದ್ದಾರೆ. ನನಗೆ ಹೆಚ್ಚುವರಿ ಹಣ ಕೊಡಿಸಬೇಕು’ ಎಂದು ಕೋರಿದರು.</p>.<p>ಬ್ಯಾಂಕ್ ವ್ಯವಸ್ಥಾಪಕರ ಜತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ</strong>: ‘ಏಳನೇ ವೇತನ ಆಯೋಗದ ಹೆಚ್ಚುವರಿ ಹಣ ಮಂಜೂರಾದರೂ, ಕೆನರಾ ಬ್ಯಾಂಕ್ನ ಬೈಲಹೊಂಗಲ ಶಾಖೆಯವರು ನನ್ನ ಖಾತೆಗೆ ಜಮೆ ಮಾಡುತ್ತಿಲ್ಲ’ ಎಂದು ಪ್ರಭುನಗರದ ನಿವೃತ್ತ ಶಿಕ್ಷಕಿ ಅಕ್ಕುತಾಯಿ ಕೋರಿ ಆಪಾದಿಸಿದ್ದಾರೆ.</p>.<p>2025ರ ಮೇ 13ರಂದು ಬೆಂಗಳೂರಿನ ಕಚೇರಿಯಿಂದ ಅಕ್ಕುತಾಯಿ ಅವರಿಗೆ ಏಳನೇ ವೇತನ ಆಯೋಗದ ಹಣ ಮಂಜೂರಾಗಿದೆ. ಆದರೆ, ಬ್ಯಾಂಕ್ನವರು ‘ದಾಖಲೆಗಳ ಸಮಸ್ಯೆಯಿಂದ ನಿಮಗೆ ಹಣ ಸಂದಾಯವಾಗಿಲ್ಲ’ ಎನ್ನುತ್ತಿದ್ದಾರೆ.</p>.<p>ಇದರಿಂದಾಗಿ ಗೊಂದಲಕ್ಕೆ ಒಳಗಾದ ನಿವೃತ್ತ ಶಿಕ್ಷಕಿ, ನ್ಯಾಯ ಕೋರಿ ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು. </p>.<p>‘ಬ್ಯಾಂಕ್ ವ್ಯವಸ್ಥಾಪಕರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇಲಾಖೆಯಿಂದ ಎಲ್ಲ ದಾಖಲೆ ನೀಡಿದರೂ ಬ್ಯಾಂಕ್ನವರು ಅಲೆದಾಡಿಸುತ್ತಿದ್ದಾರೆ. ನನಗೆ ಹೆಚ್ಚುವರಿ ಹಣ ಕೊಡಿಸಬೇಕು’ ಎಂದು ಕೋರಿದರು.</p>.<p>ಬ್ಯಾಂಕ್ ವ್ಯವಸ್ಥಾಪಕರ ಜತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>