ಕಪಿಲೇಶ್ವರ ಮಂದಿರ, ಶಿವಾಜಿ ನಗರದ ವೀರಭದ್ರೇಶ್ವರ, ಶಹಾಪುರದ ಮಹಾದೇವ ಮಂದಿರ, ಕ್ಯಾಂಪ್ನಲ್ಲಿರುವ ಮಿಲಿಟರಿ ಮಹಾದೇವ, ಸದಾಶಿವ ನಗರದ ಸದಾಶಿವ ಮಂದಿರ, ಮಹಾಂತೇಶ ನಗರದ ಮಹಾದೇವ ಮಂದಿರ, ಸಹ್ಯಾದ್ರಿ ನಗರದ ಮಹಾಬಳೇಶ್ವರ ಮಂದಿರ, ಶಿವಬಸವ ನಗರದ ಪಶುಪತಿ ದೇವಾಲಯ, ರಾಮತೀರ್ಥ ನಗರದ ಶಿವಾಲಯ, ಶಾಹುನಗರದ ಶಿವ ದೇವಾಲಯ, ಕಂಗ್ರಾಳಿಯ ಶಿವಮಂದಿರ... ಮೊದಲಾದ ಕಡೆಗಳಲ್ಲಿ ದೇವರ ಮೂರ್ತಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವ ಪತ್ರಾರ್ಚನೆ, ಕುಂಕುಮಾರ್ಚನೆ ಮತ್ತಿತರ ಪೂಜಾ ವಿಧಿ–ವಿಧಾನಗಳು ನಡೆದವು. ಬಿಲ್ವ ಪತ್ರೆ, ಪುಷ್ಪ, ಕ್ಷೀರದೊಂದಿಗೆ ಬಂದಿದ್ದ ಭಕ್ತರು ಅಭಿಷೇಕ ಸಲ್ಲಿಸಿ ನಮಿಸಿದರು.