ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ: ಪಾಲಿಕೆ ವ್ಯಾಪ್ತಿಯಲ್ಲಿವೆ 22 ಸಾವಿರಕ್ಕೂ ಅಧಿಕ ಬೀದಿನಾಯಿಗಳು

Published : 25 ಮಾರ್ಚ್ 2024, 8:24 IST
Last Updated : 25 ಮಾರ್ಚ್ 2024, 8:24 IST
ಫಾಲೋ ಮಾಡಿ
Comments
ಬೆಳಗಾವಿಯ ಕಾಮತ್‌ ಗಲ್ಲಿಯಲ್ಲಿ ಬೀದಿನಾಯಿಗಳ ಗುಂಪು
ಬೆಳಗಾವಿಯ ಕಾಮತ್‌ ಗಲ್ಲಿಯಲ್ಲಿ ಬೀದಿನಾಯಿಗಳ ಗುಂಪು
ಪಾಲಿಕೆ ವ್ಯಾಪ್ತಿಯಲ್ಲಿ 2022ರ ಜುಲೈನಿಂದ 2024ರ ಫೆಬ್ರುವರಿ ಅವಧಿಯಲ್ಲಿ 3795 ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಚಿಕಿತ್ಸೆ ಮುಂದುವರಿದಿದೆ
ಡಾ.ಸಂಜೀವ ನಾಂದ್ರೆ ಆರೋಗ್ಯಾಧಿಕಾರಿ ಮಹಾನಗರ ಪಾಲಿಕೆ
ಈಚೆಗೆ ರೈಲು ನಿಲ್ದಾಣದ ಕಡೆಗೆ ಹೊರಟಿದ್ದೆ. ಬೆಳಿಗ್ಗೆ 6ರ ಸುಮಾರಿಗೆ ಕಾಂಗ್ರೆಸ್‌ ಬಾವಿಯ ಬಳಿ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು. ಓಡುವ ಭರದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದೇನೆ
ಮನಸ್ವಿ ಬಸ್ತವಾಡಕರ ಕಾಲೇಜು ವಿದ್ಯಾರ್ಥಿನಿ
ಶಾಹೂನಗರ ಉದ್ಯಾನದಲ್ಲಿ ಹೂವು ಕೀಳುತ್ತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ಮಾಡಿ ಕಾಲಿಗೆ ಕಚ್ಚಿದವು. ನಾನು 7 ಇಂಜೆಕ್ಷನ್‌ ತೆಗೆದುಕೊಳ್ಳವುದು ಅನಿವಾರ್ಯವಾಯಿತು
ಈರವ್ವ ಶಾಹೂ ನಗರ ನಿವಾಸಿ
ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌
ಬೆಳಗಾವಿ ತಾಲ್ಲೂಕಿನ ಪಂಥಬಾಳೇಕುಂದ್ರಿ ಗ್ರಾಮದಲ್ಲಿ 2019ರಲ್ಲಿ ಬೀದಿ ನಾಯಿಗಳ ಹಿಂಡು ಒಂದೂವರೆ ವರ್ಷ ಮಗುವಿನ ಮೇಲೆ ದಾಳಿ ಮಾಡಿತ್ತು. ನಂಜಿನಿಂದ ಮಗು ಮೃತಪಟ್ಟಿತ್ತು. ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌ ಮಗುವಿನ ಸಾವಿಗೆ ಪರಿಹಾರವಾಗಿ ಪಾಲಕರಿಗೆ ₹ 10 ಲಕ್ಷ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿಗೆ ಆದೇಶ ನೀಡಿತ್ತು. ಅಲ್ಲದೇ ಇಂಥ ಅಮಾನವೀಯ ದಾಳಿಗಳು ಆಗದಂತೆ ಕ್ರಮ ವಹಿಸಬೇಕು ಎಂದೂ ತಾಕೀತು ಮಾಡಿತ್ತು.
ಹಿಡಿದ ಸ್ಥಳದಲ್ಲೇ ತಂದು ಬಿಡಬೇಕು
2017ಕ್ಕೂ ಮುನ್ನ ಬೀದಿನಾಯಿಗಳನ್ನು ಹಿಡಿದು ಕಾಡಿನಲ್ಲೋ ಊರ ಹೊರಗೋ ಬಿಡಲಾಗುತ್ತಿತ್ತು. ಆದರೆ ಪ್ರಾಣಿಪ್ರಿಯರ ಹೋರಾಟದ ಪರಿಣಾಮ ನಾಯಿಗಳನ್ನು ಕೊಲ್ಲಲು ಬೇರೆಲ್ಲೋ ಬಿಟ್ಟು ಬರಲು ಅವಕಾಶವಿಲ್ಲ. ಅವುಗಳನ್ನು ಹಿಡಿದು ಸಂತಾನ ನಿಯಂತ್ರಣ ಚಿಕಿತ್ಸೆ ನೀಡಬೇಕು. ಬಳಿಕ ಹಿಡಿದ ಸ್ಥಳದಲ್ಲೇ ತಂದು ಬಿಡಬೇಕು ಎಂಬುದು ಕಾನೂನು. ಹೀಗಾಗಿ ಯಾವ ಪ್ರದೇಶದಲ್ಲಿ ನಾಯಿಗಳ ಹಿಂಡು ದೊಡ್ಡದಿದೆಯೋ ಅಲ್ಲಿ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ.
ರಾತ್ರಿಯಿಡೀ ನಿದ್ರೆಯಿಲ್ಲ ಕಣ್ಣಿಗೆ...
ಬೀದಿನಾಯಿಗಳ ಹಿಂಡು ರಾತ್ರಿಯಿಡೀ ಒಂದಕ್ಕೊಂದು ಜಿದ್ದಿಗೆ ಬಿದ್ದಂತೆ ಬೊಗಳುತ್ತವೆ. ಇದರಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕಾಗಿದೆ. ಅದರಲ್ಲೂ ಆಜಮ್‌ನಗರ ಶಾಹೂನಗರ ಸದಾಶಿವ ನಗರ ನೆಹರೂ ನಗರ ಶಹಾಪುರ ನಾನಾವಾಡಿ ಮುಂತಾದ ಕಡೆಗಳಲ್ಲಿ ಇವುಗಳ ಕಾಟ ಹೆಚ್ಚು. ನಗರದಲ್ಲಿರುವ ಮಾಂಸಾಹಾರಿ ಹೋಟೆಲ್‌ಗಳು ಫಾಸ್ಟ್‌ಫುಡ್‌ ಸೆಂಟರ್‌ಗಳು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದೇ ಇದಕ್ಕೆ ಕಾರಣ. ಮಾಂಸದ ತುಂಡುಗಳು ಬಿದ್ದ ಸ್ಥಳದಲ್ಲಿ ನಾಯಿಗಳ ದೊಡ್ಡ ‘ಸಂಘ’ವೇ ನಿರ್ಮಾಣವಾಗುತ್ತದೆ.
₹1.10 ಕೋಟಿ ಮೀಸಲು
ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ₹25 ಲಕ್ಷ ಅನುದಾನ ಮೀಸಲಿಟ್ಟಿದ್ದರೆ ಬೀದಿನಾಯಿಗಳ ನಿರ್ವಹಣೆಗೆ ₹1.10 ಕೋಟಿ ತೆಗೆದಿರಿಸಿದೆ! ನಗರದಲ್ಲಿ ಬೀದಿನಾಯಿಗಳ ಹಾವಳಿ ಎಷ್ಟು ಗಂಭೀರವಾಗಿ ಎಂಬುದನ್ನು ಈ ಅಂಕಿ–ಸಂಖ್ಯೆಗಳೇ ತೋರಿಸುತ್ತಿವೆ. ಪಾಲಿಕೆಯಲ್ಲಿ ನಡೆಯುವ ಪ್ರತಿ ಸಭೆಯಲ್ಲೂ ಬೀದಿನಾಯಿಗಳ ಹಾವಳಿ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ ಇದಕ್ಕೆ ಇಂದಿಗೂ ಪರಿಹಾರ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT