ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಣೇಶ ದೇವಸ್ಥಾನದಿಂದ ಆರಂಭವಾದ ಕಳಸದ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಇಂಚಲ ಕ್ರಾಸ್ ಮಾರ್ಗವಾಗಿ ದೇವಸ್ಥಾನ ಆವರಣಕ್ಕೆ ಬಂದು ತಲುಪಿತು. ಮಹಿಳೆಯರು ತಲೆ ಮೇಲೆ ಪೂರ್ಣಕುಂಭ ಹೊತ್ತು ಸಾಗಿದರು. ಪುರವಂತರಿಂದ ವೀರಭದ್ರೇಶ್ವರ ಒಡಬುಗಳ ಸೇವೆ ನಡೆಯಿತು. ವೀರಭದ್ರೇಶ್ವರ ಸೇವಾ ಸಮಿತಿ ಸರ್ವ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.