‘ಈಗ ನೀರು ಬಿಡುಗಡೆ ಮಾಡುವುದರಿಂದಾಗಿ, ಹಿಡಕಲ್ ಜಲಾಶಯದಲ್ಲಿ ಒಂದು ಟಿಎಂಸಿ ನೀರಷ್ಟೇ ಉಳಿಯಲಿದೆ. ನದಿ ತೀರದ ಜನರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗೋಕಾಕ, ಮೂಡಲಗಿ ಮತ್ತು ರಾಯಬಾಗ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಮತ್ತು ಬೀಳಗಿ ತಾಲ್ಲೂಕುಗಳ ಜನರಿಗೆ ಇದರಿಂದ ನೆರವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.