‘ಪಂಪ, ಬಸವಣ್ಣ, ಅಕ್ಕ ಮಹಾದೇವಿ, ಹರಿಹರ, ಕನಕ, ಕುಮಾರವ್ಯಾಸ, ಸರ್ವಜ್ಞ, ಕುವೆಂಪು, ಕಾರಂತ, ಕಟ್ಟೀಮನಿ, ನಿರಂಜನ, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ ಮೊದಲಾದವರಿಂದ ಕನ್ನಡ ಸಾಹಿತ್ಯ ಪರಂಪರೆ ಜನಪರ ಮತ್ತು ಜೀವಪರವಾಗಿದೆ. ಇದನ್ನು ಅರಿಯುವ ಹಾಗೂ ಬರೆಯುವ ಜವಾಬ್ದಾರಿಯನ್ನು ವಿದ್ಯಾರ್ಥಿ ಸಮೂಹದಲ್ಲಿ ಬಿತ್ತುವುದು ಬಂಡಾಯ ಸಾಹಿತ್ಯ ಸಂಘಟನೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ವಿಚಾರಸಂಕಿರಣ, ಕಾರ್ಯಾಗಾರ ಮತ್ತು ಸಂವಾದದ ಮೂಲಕ ಬಂಡಾಯ ಸಾಹಿತ್ಯದ ವಿದ್ಯಾರ್ಥಿ ಘಟಕವನ್ನು ಕ್ರಿಯಾಶೀಲಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.