ಬೆಳಗಾವಿ: ‘ನಗರದಲ್ಲಿ ನ. 1ರಂದು ಕರಾಳ ದಿನ ಆಚರಿಸಿಯೇ ತೀರುತ್ತೇವೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ದೀಪಕ ದಳವಿ ಹೇಳಿದರು.
ನಗರದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತ ಅನುಮತಿ ನೀಡದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಲಾಗುವುದು. ದೇವರು ಕರ್ನಾಟಕ ಪೊಲೀಸರಿಗೆ ಸದ್ಬುದ್ಧಿ ನೀಡಲಿ’ ಎಂದರು.
‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ನ.1ರಂದು ಬಹಳ ವರ್ಷಗಳಿಂದಲೂ ಕರಾಳ ದಿನ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಯಾವುದೇ ಕಾರಣಕ್ಕೂ ನಮ್ಮ ನಿರ್ಣಯ ಬದಲಿಸುವುದಿಲ್ಲ’ ಎಂದು ತಿಳಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ, ಮುಖಂಡರಾದ ಮಾಲೋಜಿರಾವ ಅಷ್ಟೇಕರ, ಸುರೇಶ ರಾಜುಕರ, ರಣಜಿತ ಚವಾಣ, ಪ್ರಕಾಶ ಮರಗಾಳೆ ಇದ್ದರು.