<p><strong>ಬೆಳಗಾವಿ: ‘</strong>ಹೆಣ್ಣು ಮಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಗೆಲ್ಲಬಹುದು. ಏನನ್ನಾದರೂ ಸಾಧಿಸಬಹುದು. ಇದಕ್ಕೆ ಹಲವಾರು ಮಹಿಳೆಯರ ಸಾಧನೆಗಳೇ ಸಾಕ್ಷಿಯಾಗಿವೆ’ ಎಂದು ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.</p>.<p>ನಗರದ ಕುಮಾರ್ ಗಂಧರ್ವ ಕಲಾಮಂದಿರದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಕೊರಮ ಕೊರಚ ಮಹಿಳಾ ಸಮಾಜದ ರಾಜ್ಯ ಪ್ರಥಮ ಮಹಿಳಾ ಸಮಾವೇಶವನ್ನುಉದ್ಘಾಟಿಸಿ ಮಾತನಾಡಿದ ಶ್ರೀಗಳು, ‘12ನೇ ಶತಮಾನದಲ್ಲಿಯೇ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದ್ದನ್ನು ಸ್ಮರಿಸಬಹುದು. ಶಿಕ್ಷಣ ಬದಲಾದಂತೆ ಸಮಾಜ ಬದಲಾಗುತ್ತಿದೆ. ಈ ಹಿಂದೆ ಮಹಿಳೆಯರಿಗೆ ಶಿಕ್ಷಣ ಕಲಿಯಲು ಅನುಕೂಲ ಇರಲಿಲ್ಲ. ಆದರೆ, ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆ ತಾನು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ’ ಎಂದರು.</p>.<p>ಸಮಾಜದ ಮುಖಂಡ ಮಂಜುನಾಥ ಮಾತನಾಡಿ, ‘ನಮ್ಮ ಸಮಾಜದಲ್ಲಿ ಯಾವುದೇ ರಾಜಕೀಯ ಪ್ರಾತಿನಿಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ರಾಜಕೀಯದಲ್ಲಿ ಒಂದು ಒಳ್ಳೆಯ ಸ್ಥಾನಮಾನದ ಜೊತೆಗೆ ನಿಗಮ ಮಂಡಳಿ ಸಿಗಬೇಕಾಗಿದೆ’ ಎಂದು ಹೇಳಿದರು.</p>.<p>ಚಂದ್ರಶೇಖರ ಸುಖಸಾರೆ ಮಾತನಾಡಿ, ‘ಹಿಂದುಳಿದ ಈ ಸಮಾಜಕ್ಕೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಬೇಕು’ ಎಂದರು.</p>.<p>ಸಮಮಾಜದ ಜಿಲ್ಲಾ ಘಟಕದ ಅಧ್ಯಕ್ಷ್ಯೆ ಯಶೋದಾ ಭಜಂತ್ರಿ, ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಕಾ ಬಿ.ಎನ್., ರಾಜ್ಯ ಸಂಚಾಲಕ ಹನುಮಂತ ಸಿಂಗನಹಳ್ಳಿ ಮಾತನಾಡಿದರು.</p>.<p>ಮುಖಂಡರಾದ ರಾಮ್ ಜಿ, ಯಮನೂರ ಗುಡಿಹಾಳ, ಶ್ರೀಕಾಂತ ಭಜಂತ್ರಿ, ರವೀಂದ್ರ ಭಜಂತ್ರಿ, ಗಂಗಾರಾಮ ವಾಜಂತ್ರಿ, ಪದ್ಮಾವತಿ ಸಿಂಗನಹಳ್ಳಿ, ರೇಣುಕಾ ಮಲ್ಲೂರು, ಅಂಜನಾ ಜಾಧವ, ಚೇತನಾ ಗದಗ, ರೇಣುಕಾ ಭಜಂತ್ರಿ, ಶೈಲಜಾ ತುಮಕೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: ‘</strong>ಹೆಣ್ಣು ಮಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಗೆಲ್ಲಬಹುದು. ಏನನ್ನಾದರೂ ಸಾಧಿಸಬಹುದು. ಇದಕ್ಕೆ ಹಲವಾರು ಮಹಿಳೆಯರ ಸಾಧನೆಗಳೇ ಸಾಕ್ಷಿಯಾಗಿವೆ’ ಎಂದು ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.</p>.<p>ನಗರದ ಕುಮಾರ್ ಗಂಧರ್ವ ಕಲಾಮಂದಿರದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಕೊರಮ ಕೊರಚ ಮಹಿಳಾ ಸಮಾಜದ ರಾಜ್ಯ ಪ್ರಥಮ ಮಹಿಳಾ ಸಮಾವೇಶವನ್ನುಉದ್ಘಾಟಿಸಿ ಮಾತನಾಡಿದ ಶ್ರೀಗಳು, ‘12ನೇ ಶತಮಾನದಲ್ಲಿಯೇ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದ್ದನ್ನು ಸ್ಮರಿಸಬಹುದು. ಶಿಕ್ಷಣ ಬದಲಾದಂತೆ ಸಮಾಜ ಬದಲಾಗುತ್ತಿದೆ. ಈ ಹಿಂದೆ ಮಹಿಳೆಯರಿಗೆ ಶಿಕ್ಷಣ ಕಲಿಯಲು ಅನುಕೂಲ ಇರಲಿಲ್ಲ. ಆದರೆ, ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆ ತಾನು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ’ ಎಂದರು.</p>.<p>ಸಮಾಜದ ಮುಖಂಡ ಮಂಜುನಾಥ ಮಾತನಾಡಿ, ‘ನಮ್ಮ ಸಮಾಜದಲ್ಲಿ ಯಾವುದೇ ರಾಜಕೀಯ ಪ್ರಾತಿನಿಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ರಾಜಕೀಯದಲ್ಲಿ ಒಂದು ಒಳ್ಳೆಯ ಸ್ಥಾನಮಾನದ ಜೊತೆಗೆ ನಿಗಮ ಮಂಡಳಿ ಸಿಗಬೇಕಾಗಿದೆ’ ಎಂದು ಹೇಳಿದರು.</p>.<p>ಚಂದ್ರಶೇಖರ ಸುಖಸಾರೆ ಮಾತನಾಡಿ, ‘ಹಿಂದುಳಿದ ಈ ಸಮಾಜಕ್ಕೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಬೇಕು’ ಎಂದರು.</p>.<p>ಸಮಮಾಜದ ಜಿಲ್ಲಾ ಘಟಕದ ಅಧ್ಯಕ್ಷ್ಯೆ ಯಶೋದಾ ಭಜಂತ್ರಿ, ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಕಾ ಬಿ.ಎನ್., ರಾಜ್ಯ ಸಂಚಾಲಕ ಹನುಮಂತ ಸಿಂಗನಹಳ್ಳಿ ಮಾತನಾಡಿದರು.</p>.<p>ಮುಖಂಡರಾದ ರಾಮ್ ಜಿ, ಯಮನೂರ ಗುಡಿಹಾಳ, ಶ್ರೀಕಾಂತ ಭಜಂತ್ರಿ, ರವೀಂದ್ರ ಭಜಂತ್ರಿ, ಗಂಗಾರಾಮ ವಾಜಂತ್ರಿ, ಪದ್ಮಾವತಿ ಸಿಂಗನಹಳ್ಳಿ, ರೇಣುಕಾ ಮಲ್ಲೂರು, ಅಂಜನಾ ಜಾಧವ, ಚೇತನಾ ಗದಗ, ರೇಣುಕಾ ಭಜಂತ್ರಿ, ಶೈಲಜಾ ತುಮಕೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>