ಗ್ರಾಮದ ಶ್ರೀ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಠದ ಆವರಣದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನದ ಉದ್ಘಾಟನೆ ವೇಳೆ ಖುಷಿಗಾಗಿ ಆಕಾಶಕ್ಕೆ ಗುಂಡು ಹಾರಿಸುವ ವಾಡಿಕೆ ಇಲ್ಲಿದೆ. ಅದರಂತೆ ಮುಖ್ಯ ಅತಿಥಿಯಾಗಿದ್ದ ಧಾರವಾಡದ ಶಿವಪ್ಪ ಪ್ರಭುಲಾಪುರೆ ರಿವಾಲ್ವರ್ನಿಂದ ಮೇಲೆ ಗುಂಡು ಹಾರಿಸಿದ್ದಾರೆ. ಅದು ಆಕಾಶದತ್ತ ಚಿಮ್ಮದೆ ವೇದಿಕೆಗೆ ಅಳವಡಿಸಿದ್ದ ಕಬ್ಬಿಣ ಪಟ್ಟಿಗೆ ತಾಗಿ, ಕೆಳಗೆ ಬಂದು ಇಬ್ಬರಿಗೆ ತಗುಲಿ ಗಾಯಗಳಾಗಿವೆ.