ನಗರದ ಬ್ಯಾಳಿ ಕಾಟಾ ಬಳಿಯ ಪಟಗುಂದಿ ಹಣಮಂತ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಮೇಶ ಅವರು, ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ನಂತರ ತಹಶೀಲ್ದಾರ್ ಕಾರ್ಯಾಲಯ ತಲುಪಿ ಚುನಾವಣಾಧಿಕಾರಿ ದಿನೇಶಕುಮಾರ ಜಿ.ಟಿ. ಅವರಿಗೆ ನಾಮಪತ್ರ ಸಲ್ಲಿಸಿದರು.