ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಕಮಲಾಪುರದ ಅಳ್ಳಿಕೆರೆಯ ಕನ್ನಡ ವಿಶ್ವವಿದ್ಯಾಲಯ ರಸ್ತೆ ಬಳಿ ಸೋಮವಾರ ರಾತ್ರಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಚಾಲಕ ಸೇರಿದಂತೆ ಮೂವರನ್ನು ಹಾಗೂ 5.46 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಗಂಗಾವತಿಯ ಖಾಜಾ ಮೈನುದ್ದೀನ್, ಇಮ್ರಾನ್ ಹಾಗೂ ಮಂಜು ಆರೋಪಿಗಳಾಗಿದ್ದು, ಅಕ್ರಮ ಸಾಗಾಟಕ್ಕೆ ಬಳಸಿದ್ದ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಆರ್. ಅಜೀತ್ ಕುಮಾರ್, ಶಿರಸ್ತೇದಾರ ಎಚ್. ನಾಗರಾಜ್, ಪಿಎಸ್ಐ ಅರುಣ್ ರಾಠೋಡ್ ನೇತೃತ್ವದ ತಂಡದಲ್ಲಿ ಬಿ.ಎಂ.ಮೊಹಮ್ಮದ್ ಷರೀಫ್, ಕೊಟ್ರೇಶ್, ಅಶೋಕ್ ಹಾಗೂ ಆಂಜಿನೇಯ ಇದ್ದರು.