ನಗರದ ಪಾಂಡುರಂಗಯ್ಯ ಎಂಬುವರು ಫಾರಂ ನಂಬರ್ ಮೂರು ಪಡೆಯಲು ನಗರಸಭೆಗೆ ಹೋಗಿದ್ದರು. ಈ ವೇಳೆ ಬಿಲ್ ಕಲೆಕ್ಟರ್ ನಾಲ್ಕು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ಸಾವಿರ ನಗದು ಪಡೆದಿದ್ದಾರೆ. ಸಂಜೆ ಮಿಕ್ಕುಳಿದ ಮೂರು ಸಾವಿರ ರೂಪಾಯಿ ಕೊಡುವಾಗ ಎ.ಸಿ.ಬಿ. ಸಿಪಿಐ ಶ್ರೀಧರ್ ದೊಡ್ಡಿ ನೇತೃತ್ವದ ತಂಡ ದಾಳಿ ನಡೆಸಿ, ಹಣದ ಸಮೇತ ಮಾರೆಣ್ಣ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.