‘ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಅದರಲ್ಲಿ ಪಾಲ್ಗೊಂಡಿರುವವರನ್ನು ಗುರಿಯಾಗಿರಿಸಿ ವರ್ಗಾವಣೆ, ಅಮಾನತು ಹಾಗೂ ವಜಾದಂತಹ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಇದು ಮುಷ್ಕರ ದುರ್ಬಲಗೊಳಿಸುವ ಹುನ್ನಾರ ಬಿಟ್ಟರೆ ಬೇರೇನೂ ಇಲ್ಲ. 2017ರಲ್ಲಿ ಹಣ ದುರುಪಯೋಗವಾದರೆ ಅದರ ಬಗ್ಗೆ ವಿಚಾರಣೆ ನಡೆಸಿ, ಆಗಲೇ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಾಲ್ಕು ವರ್ಷಗಳ ನಂತರ, ಅದು ಮುಷ್ಕರದ ಸಮಯದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ಎಂತಹವರಿಗೂ ಅರ್ಥವಾಗುವ ವಿಚಾರ. ಆದರೆ, ನೌಕರರು ಇದಕ್ಕೆ ಜಗ್ಗುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಷ್ಕರ ನಿರತ ನೌಕರರು ಪ್ರತಿಕ್ರಿಯಿಸಿದ್ದಾರೆ.