ಅ.9ರಂದು ಇನ್ನೊಂದು ಪ್ರಕರಣ: ಮತ್ತೊಂದು ಪ್ರಕರಣದಲ್ಲಿ, ನಗರದ ಇಂಡಿಯನ್ ಸ್ಕೂಲ್ ಮಾಲೀಕರಾದ ಶಾಹೀದಾ ಬೇಗಂ ಅವರಿಗೆ ಶಾಲೆಗೆ ಸಂಬಂಧಿಸಿ ಫಾರಂ ನಂ2 ನೀಡಲು ಪಾಲಿಕೆಯಲ್ಲಿ ₹50 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಆಯುಕ್ತರ ಆಪ್ತ ಸಹಾಯಕ ಮಲ್ಲಿಕಾರ್ಜುನ್ ಎಸ್.ಪಾಟೀಲ್ ಮತ್ತು ಡಿ. ದರ್ಜೆ ನೌಕರ ಎಸ್.ಬಾಷಾ ಸಿಕ್ಕಿಬಿದ್ದಿದ್ದರು.