‘ಸುಮಾರು 30 ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಮೀಟರ್ಗೇಜ್ ಇದ್ದಾಗ ರೈಲಿನಲ್ಲಿ ಓಡಾಡಿದ್ದೆ. ಅದಾದ ನಂತರ ಈಗ ಕೊಟ್ಟೂರಿನಿಂದ ಇಲ್ಲಿಗೆ ಬಂದಿರುವೆ. ಪುನಃ ಊರಿಗೆ ಇದೇ ರೈಲಿನಲ್ಲಿ ಹೋಗುವೆ. ರೈಲು ಸಂಚಾರದಿಂದ ಬಹಳ ಖುಷಿಯಾಗಿದೆ. ಕೊಟ್ಟೂರೇಶ್ವರನ ದರ್ಶನ, ಹೊಸಪೇಟೆಯಲ್ಲಿ ಕಚೇರಿ ಕೆಲಸಕ್ಕೆ ಹೋಗಿ ಬರಲು ಸಾಕಷ್ಟು ಅನುಕೂಲವಾಗಿದೆ’ ಎಂದು ಕೊಟ್ಟೂರು ನಿವಾಸಿ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.