ಜಲಾಶಯದ ಕೆಳಮಟ್ಟದ ಕಾಲುವೆಗೆ (ಎಲ್.ಎಲ್.ಸಿ.) ಏಪ್ರಿಲ್ ಕೊನೆಯ ವರೆಗೆ ನೀರು ಹರಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಆದರೆ, ಮಾರ್ಚ್ 30ರ ವರೆಗೆ ನೀರು ಬಿಡಲು ಸಭೆ ತೀರ್ಮಾನಿಸಿದೆ. ಮೇಲ್ಮಟ್ಟದ ಕಾಲುವೆಗೆ (ಎಚ್.ಎಲ್.ಸಿ.) ಡಿ. 20ರಿಂದ 30ರ ವರೆಗೆ ನೀರು ನಿಲ್ಲಿಸಿ, ಜ. 15ರ ವರೆಗೆ ಆನ್ ಆಫ್ ಪ್ರಕಾರ ನೀರು ಹರಿಸಲಾಗುತ್ತದೆ. ಫೆಬ್ರುವರಿ ವರೆಗೆ ಸತತವಾಗಿ ನೀರು ಹರಿಸಬೇಕೆಂಬ ರೈತರ ಮಾತಿಗೆ ಕಿವಿಗೊಟ್ಟಿಲ್ಲ. ವಿಜಯನಗರ ಉಪಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವ ನಿರ್ಧಾರ ರೈತರಿಗೆ ಸಂತಸ ತಂದಿದೆ.