ಬಾಗಿಲು ಮುಚ್ಚಿರುವ ನಗರದ ಐ.ಎಸ್.ಆರ್. ಸಕ್ಕರೆ ಕಾರ್ಖಾನೆ ಮಾದರಿ ನಿರ್ಮಿಸಲಾಗಿದೆ. ಅದರ ಮುಂಭಾಗದಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದರ ಸುತ್ತಲೂ ರೈತರು, ಎತ್ತಿನ ಬಂಡಿ, ಕಬ್ಬು ಇಡಲಾಗಿದೆ. ಕಬ್ಬು ಬೆಳೆಗಾರರು, ‘ಕಾರ್ಖಾನೆ ಆರಂಭಿಸಿ’, ‘ನಮ್ಮ ಬಾಕಿ ಹಣ ಕೊಡಿ’, ‘ನಮ್ಮನ್ನು ಉಳಿಸಿ’, ‘ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸೋರು ಯಾರು?’ ಎಂಬ ಬರಹವುಳ ಫಲಕಗಳನ್ನು ಹಿಡಿದು ಕುಳಿತಿದ್ದಾರೆ.