ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಕೆ. ರೈ, ಡಿಆರ್ಎಂ ಅರವಿಂದ ಮಳಖೇಡೆ ಅವರು ಕಾರಿಗನೂರಿನಲ್ಲಿ ರೈಲಿಗೆ ಪೂಜೆ ಸಲ್ಲಿಸಿ, ಕಾಮಗಾರಿ ವೀಕ್ಷಣೆಗೆ ಚಾಲನೆ ನೀಡಿದರು. ಕಾರಿಗನೂರಿನಿಂದ ಹರ್ಲಾಪುರ, ಹರ್ಲಾಪುರದಿಂದ ಕಾರಿಗನೂರಿನ ವರೆಗೆ ಸಂಚರಿಸಿ, ವಿದ್ಯುದ್ದೀಕರಣ ಕಾಮಗಾರಿ ಪರಿಶೀಲಿಸಿ, ಸ್ಥಳದಲ್ಲೇ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.