‘ನಿಮ್ಮ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಲ್ಲ, ‘ಸೀದಾ ರುಪೈ’ ಸಿಎಂ (ದುಡ್ಡು ಕೊಟ್ಟರೆ ಕೆಲಸ). ಕರ್ನಾಟಕದಲ್ಲಿ ಈ ‘ಸೀದಾ ರುಪೈ ಸರ್ಕಾರ್’, ‘ಸೀದಾ ರುಪೈ ವ್ಯಕ್ತಿ ಸರ್ಕಾರ್’, ‘ಸೀದಾ ರುಪೈ ವ್ಯಕ್ತಿ ಸಂಸ್ಕೃತಿ ಸರ್ಕಾರ್’ ಬೇಕಾ?’ ಎಂದು ಸೇರಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿದ ಮೋದಿ, ‘ಕರ್ನಾಟಕಕ್ಕೆ ಇಂತಹ ಸರ್ಕಾರ ಶೋಭೆ ತರುವುದಿಲ್ಲ. ಜವಾಬ್ದಾರಿಯುತ, ಪ್ರಾಮಾಣಿಕ ಸರ್ಕಾರದ ಅವಶ್ಯಕತೆ ಕರ್ನಾಟಕಕ್ಕೆ ಬೇಕಿದೆ’ ಎಂದು ಹೇಳಿದರು.