ಹೊಸಪೇಟೆ: ಜಡೇಶಿವಯೋಗಾಶ್ರಮ ಮಠದ 57ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ತಾಲ್ಲೂಕಿನ ಕಾಕುಬಾಳು ಗ್ರಾಮದಲ್ಲಿ 21 ಜೋಡಿ ಸಾಮೂಹಿಕ ವಿವಾಹ ನಡೆಯಿತು.
ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮದುವೆ ಕಾರ್ಯ ನಡೆಸಿಕೊಟ್ಟರು. 21 ಜೋಡಿಗೆ ಮಾಂಗಲ್ಯ, ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಚಂದ್ರಶೇಖರಪ್ಪ, ಆರ್. ಮಲ್ಲಿಕಾರ್ಜುನ ನೀಡಿದರು. ಮಠದ ಷಡಕ್ಷರಯ್ಯ ಸ್ವಾಮೀಜಿ, ವಿಶ್ವರಾಧ್ಯ, ಸುರೇಶ ಕಾಕುಬಾಳು ಇದ್ದರು.