ಮೂರು ಎಕರೆ ಪಪ್ಪಾಯ ಕೃಷಿಗೆ ಹನಿ ನೀರಾವರಿ ಸೇರಿದಂತೆ ₹2 ಲಕ್ಷ ಖರ್ಚು ಮಾಡಿದ್ದಾರೆ. ಎಕರೆಗೆ ಸರಾಸರಿ 30 ಟನ್ ಇಳುವರೀ ನಿರೀಕ್ಷಿಸಲಾಗಿತ್ತು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ. ಇನ್ನೊಂದೆಡೆ ಸಾಲ ಬೆನ್ನೇರುವಂತೆ ಮಾಡಿದೆ. ಹನುಮಂತಪ್ಪ ಪ್ರಯೋಗ ಶಾಲೆಯಂತೆ ಮಿಶ್ರ ಬೆಳೆ ಬೆಳೆಯುತ್ತಾರೆ. 30-40 ಸೆಂಟ್ಸ್ ತುಂಡುಭೂಮಿಯಲ್ಲಿ ಬೀಜೋತ್ಪಾದನೆ ಮಾಡಿ ಲಕ್ಷಾಂತರ ಆದಾಯ ಗಳಿಸುತ್ತಾರೆ. ಆದರೆ, ಈ ಬಾರಿ ಅವರಿಗೆ ಕೊರೊನಾ ಸಂಕಟ ತಂದಿದೆ.