ನಿವೃತ್ತ ಮುಖ್ಯ ಯೋಜನಾಧಿಕಾರಿ ವೀರ ಶಿವಶಂಕರರೆಡ್ಡಿ, ’ಒಂದು ಸಂಸ್ಥೆ, ಒಂದು ರಾಜ್ಯ ಅಥವಾ ಒಂದು ದೇಶದ ಅಭಿವೃದ್ಧಿ ಅಥವಾ ಯಶಸ್ಸು ಆ ಸಂಸ್ಥೆಯ, ರಾಜ್ಯದ, ದೇಶದ ಸದಸ್ಯರನ್ನು ಅವಲಂಬಿಸಿರುತ್ತದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೂ ಕೇಂದ್ರಿಕೃತವಾಗಿರಬಾರದು. ಎಲ್ಲವೂ ವಿಕೇಂದ್ರಿಕೃತವಾಗಬೇಕು. ಜನರ ಸಾಮರ್ಥ್ಯ, ನಿರ್ಮಾಣವು ಪ್ರಮುಖವಾಗಿ ಸ್ವಯಂ ಪಾಲ್ಗೊಳ್ಳುವ ಮೂಲಕ ಹಿಡಿತ ಸಾಧಿಸುವುದು. ತರಬೇತಿ, ಕೌಶಲ, ಮನೋವೃತ್ತಿ ಅಂಶಗಳನ್ನು ಅವಲಂಬಿಸಿದೆ’ ಎಂದು ಹೇಳಿದರು.