1991ರ ಇಸ್ವಿಯಲ್ಲೇ ಎರಡು ಸಲ ಭೇಟಿ ಕೊಟ್ಟಿದ್ದು ವಿಶೇಷ. ಮೊದಲ ಸಲ, ಕೊಟ್ಟೂರು ಸ್ವಾಮಿ ಮಠದಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ‘ಶಿಕ್ಷಣ ಪದ್ಧತಿ’ ಕುರಿತು ಚರ್ಚೆ ನಡೆದಿತ್ತು. ಹಿರಿಯ ಸಂಶೋಧಕ ಚಿದಾನಂದಮೂರ್ತಿ, ಸಂಗನಬಸವ ಸ್ವಾಮೀಜಿ, ಒಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಜಮಖಂಡಿಯ ಓಳೆ ಮಠದ ಅಭಿನವ ಕುಮಾರ ಸ್ವಾಮೀಜಿ ಪಾಲ್ಗೊಂಡಿದ್ದರು.