‘ಅವಿಭಜಿತ ಬಳ್ಳಾರಿ ಜಿಲ್ಲೆ ಎಂದರೆ ಬರೀ ಉರಿ ಬಿಸಿಲು, ಬರಡು ಭೂಮಿ ಅಲ್ಲ. ದಟ್ಟವಾದ ಕಾಡು ಇದೆ. ಕರಡಿ, ಚಿರತೆ, ಗುಳ್ಳೇನರಿ, ಕಾಡು ಹಂದಿ ಸೇರಿದಂತೆ ಹಲವು ಜೀವ ಜಂತುಗಳಿವೆ. ಜಿಲ್ಲೆಯಲ್ಲಿ ಶೇ 20ರಷ್ಟು ಅರಣ್ಯ ಪ್ರದೇಶ ಇದೆ. ದರೋಜಿ ಕರಡಿಧಾಮ, ಗುಡೇಕೋಟೆ ಕರಡಿಧಾಮ, ಅಂಕಸಮುದ್ರ ಸಂರಕ್ಷಿತ ಪಕ್ಷಿಧಾಮ, 34 ಕಿ.ಮೀ ತುಂಗಾಭದ್ರಾ ನೀರುನಾಯಿ ಸಂರಕ್ಷಿತ ಪ್ರದೇಶ, ಸಿರುಗುಪ್ಪದಲ್ಲಿ ಅಳಿವಿನಂಚಿತ ಎರೆಬೂತ ಪಕ್ಷಿಗಳಿವೆ. ಹೀಗೆ ಇಡೀ ಜಿಲ್ಲೆ ಜೀವವೈವಿಧ್ಯದ ತಾಣವಾಗಿದೆ’ ಎಂದು ತಿಳಿಸಿದರು.