ಹೊಸಪೇಟೆ: ಇಲ್ಲಿನ ಸರ್ದಾರ್ ಪಟೇಲ್ ಶಾಲೆಯ ಗೆಳೆಯರ ಬಳಗದಿಂದ ಗುರುವಾರ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.
‘ಹಿಂದೆ ಕೆಲಸದ ಅವಧಿಯೇ ಇರಲಿಲ್ಲ. ಭೂಮಾಲೀಕರು, ಬಂಡವಾಳಷಾಹಿಗಳು ಮನಬಂದಂತೆ ಕೂಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಆದರೆ, ಎಡಪಂಥೀಯ ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಶೋಷಣೆಗೆ ಕಡಿವಾಣ ಬಿದ್ದಿದೆ’ ಬಳಗದ ಸದಸ್ಯ ಈಡಿಗರ ಮಂಜುನಾಥ ತಿಳಿಸಿದರು.
ಇದೇ ವೇಳೆ ಬಳಗದ ಹತ್ತು ಜನ ಸದಸ್ಯರು ರಕ್ತದಾನ ಮಾಡಿದರು. ಸ್ಲಂವೆಂಕಟೇಶ್, ತಿರುಮಲ, ರಾಘು, ಅಂಜಿ, ಅಶೋಕ್ ಲಿಂಗಯ್ಯ, ಇಸ್ಮಾಯಿಲ್, ಮಾಬು, ಕಲಂದರ್, ಮೋಹನ್ ಇದ್ದರು.