ನವದೆಹಲಿ : ಪವಿತ್ರ ರಂಜಾನ್ ಮಾಸ ಆರಂಭವಾಗುವ ಕಾರಣ ಒಂದು ತಿಂಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಡೆಸದಂತೆ ಭದ್ರತಾ ಪಡೆಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.
ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ನೆರವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹಸಚಿವಾಲಯ ತಿಳಿಸಿದೆ.
ಆದರೆ ದಾಳಿ ನಡೆದಾಗ ಪ್ರತಿದಾಳಿ ನಡೆಸಲು ಅಥವಾ ಅಮಾಯಕ ಜೀವಗಳಿಗೆ ಆಪತ್ತು ಎದುರಾದಾಗ ಪ್ರತಿರೋಧ ತೋರಲು ಸೇನೆಗೆ ಅಧಿಕಾರ ಇದೆ.
ಈ ನಿರ್ಧಾರವನ್ನು ಎಲ್ಲರೂ ಗೌರವಿಸುವ ಮೂಲಕ ಮುಸ್ಲಿಂ ಸಹೋದರ, ಸಹೋದರಿಯರು ಯಾವುದೇ ಅಡ್ಡಿಯಿಲ್ಲದೆ ರಂಜಾನ್ ಆಚರಿಸಲು ನೆರವಾಗಬೇಕು ಎಂದು ಸಚಿವಾಲಯದ ವಕ್ತಾರರು ಕೋರಿದ್ದಾರೆ.