ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ವಿಚಾರಕ್ರಾಂತಿ ಎನ್ನುವುದು ಏಕಮುಖಿ, ಏಕರೇಖೆಯಲ್ಲಿರುವುದಲ್ಲ. ಸಮಾಜವಾದ, ನಾಸ್ತಿಕವಾದ, ಸಮಾನತೆ, ಮೌಢ್ಯವಿರೋಧಿ ಹೋರಾಟ, ಜಾತಿವಿರೋಧಿ ಹೋರಾಟ, ವರ್ಗವಿರೋಧಿ ಹೋರಾಟಗಳೆಲ್ಲ ಆಯಾ ಸಂದರ್ಭಗಳಿಗೆ ಅನುಗುಣವಾಗಿ ಮುನ್ನೆಲೆಗೆ ಬಂದಿರಬಹುದು. ವಿಚಾರ ಕ್ರಾಂತಿ ಎನ್ನುವುದು ಇವುಗಳೆಲ್ಲ ಸೇರಿದ ಒಕ್ಕೂಟ’ ಎಂದು ಪ್ರತಿಪಾದಿಸಿದರು.