<p><strong>ಬೆಂಗಳೂರು:</strong> ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತು ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿರುವ ಹಣಕ್ಕೆ ಗಾಳ ಹಾಕುವ ‘ಬಾಟಮ್ ಫಿಶಿಂಗ್’ ಜಾಲ, ವಿವಿಧ ಆಮಿಷಗಳನ್ನೊಡ್ಡಿ ಮೂರೇ ದಿನಗಳಲ್ಲಿ ನಗರದ 27 ಮಂದಿಯ ಖಾತೆಗಳಿಂದ ಹಣ ಎಗರಿಸಿದೆ.</p>.<p>ವಿಮಾನಯಾನ ಸಂಸ್ಥೆಗಳಲ್ಲಿ ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲವರಿಗೆ ನಂಬಿಸಿದ್ದರೆ, ಮತ್ತೆ ಕೆಲವರಿಗೆ, ‘ನಿಮಗೆ ಬಹುಮಾನ ಲಭಿಸಿದೆ, ಲಾಟರಿ ಗೆದ್ದಿದ್ದೀರ, ಶಾಪಿಂಗ್ ಕೂಪನ್ ಬಂದಿದೆ, ವಿದೇಶ ಪ್ರವಾಸಕ್ಕೆ ಆಯ್ಕೆಯಾಗಿದ್ದೀರ....’ ಎಂಬ ಆಸೆ ತೋರಿಸಿ ಒಬ್ಬೊಬ್ಬರಿಂದ ₹ 10 ಸಾವಿರದಿಂದ ₹ 50 ಸಾವಿರದವರೆಗೆ ಪೀಕಿ<br />ದ್ದಾರೆ. ಅ.24 ರಿಂದ ಅ.26ರ ನಡುವೆಯೇ ‘ಬಾಟಂ ಫಿಶಿಂಗ್’ ವಿರುದ್ಧ 27 ಮಂದಿ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.</p>.<p>ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್), ಐಪಿ ವಿಳಾಸ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಆಧರಿಸಿ ವಂಚಕರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಅವರ ಬಂಧನ ಕಷ್ಟ ಸಾಧ್ಯ ಎಂದೂ ಅವರೇ ಹೇಳುತ್ತಿದ್ದಾರೆ.</p>.<p class="Subhead"><strong>ಏನಿದು ಬಾಟಮ್ ಫಿಶಿಂಗ್?: </strong>ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅಲ್ಪ ಮೊತ್ತದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವುದೇ ಬಾಟಮ್ ಫಿಶಿಂಗ್.</p>.<p>ಈ ಕೃತ್ಯವೆಸಗುವ ವಂಚಕರು ₹1 ಸಾವಿರದಿಂದ ₹50 ಸಾವಿರದ ಒಳಗೆ ಮಾತ್ರ ದೋಚುತ್ತಾರೆ. ಸಣ್ಣ ಪ್ರಮಾಣದಲ್ಲಿ ಹಣ ಕಳೆದು<br />ಕೊಂಡರೆ ನಾಗರಿಕರು ಪೊಲೀಸರಿಗೆ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೂ, ಕಡಿಮೆ ಮೊತ್ತವಾದ ಕಾರಣ ಪೊಲೀಸರು ತನಿಖೆ ನಡೆಸುವುದಿಲ್ಲ ಎಂಬುದು ದಂಧೆಕೋರರ ವಿಶ್ವಾಸ.</p>.<p class="Subhead">ವಿಘ್ನೇಶನ ಹೆಸರಿನಲ್ಲೇ ಕರೆಗಳು: ರಾಮಯ್ಯ ಲೇಔಟ್ನ ಸೋಮ್ಯಾ ಸಿಂಗ್ ಎಂಬ ಯುವತಿಗೆ ಅ.24ರಂದು ಕರೆ ಮಾಡಿರುವ ವ್ಯಕ್ತಿ<br />ಯೊಬ್ಬ, ‘ನನ್ನ ಹೆಸರು ವಿಘ್ನೇಶ್ ಭಟ್ಟಾಚಾರ್ಯ. ನೌಕರಿ ಡಾಟ್ ಕಾಂ ಕಂಪನಿಯ ಸಿಇಒ. ನೀವು ಉದ್ಯೋಗ ಅರಸಿ ಸಲ್ಲಿಸಿರುವ ಅರ್ಜಿ ನೋಡಿದೆ. ಶೈಕ್ಷಣಿಕ ಸಾಧನೆ ಹಾಗೂ ಭವಿಷ್ಯದ ಗುರಿಗಳ ಬಗ್ಗೆ ನೀವು ಹೇಳಿರುವುದು ಇಷ್ಟವಾಯಿತು.</p>.<p class="Subhead">ಹೀಗಾಗಿ, ನಮ್ಮಲ್ಲೇ ಕೆಲಸ ಕೊಡಲು ನಿರ್ಧರಿಸಿದ್ದೇನೆ. ಉದ್ಯೋಗದ ನೋಂದಣಿ ಶುಲ್ಕ, ದಾಖಲೆ ಪರಿಶೀಲನಾ ಶುಲ್ಕ ಹಾಗೂ ತರಬೇತಿ ಶುಲ್ಕವೆಂದು ಕೂಡಲೇ ₹ 31,800 ಪಾವತಿಸಿ’ ಎಂದಿದ್ದ. ಆ ಮಾತುಗಳನ್ನು ಸಂಪೂರ್ಣವಾಗಿ ನಂಬಿದ ಸೋಮ್ಯಾ, ಆ ದಿನವೇ ವಂಚಕನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದಾರೆ. ಹಣ ವರ್ಗಾವಣೆಯಾದ ಕೂಡಲೇ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆ ನಂತರ ಸೋಮ್ಯಾ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದಾರೆ.</p>.<p>ಅದೇ ರೀತಿ ಲಕ್ಕಸಂದ್ರದ ಭವ್ಯಾ ಎಂಬುವರಿಗೂ ವಿಘ್ನೇಶ್ ಎಂಬ ಹೆಸರಿನಿಂದಲೇ ಕರೆ ಬಂದಿದ್ದು, ‘ನೌಕರಿ ಪ್ರೈಮ್ ಕಂಪನಿ’ಯಲ್ಲಿ ಉನ್ನತ ಹುದ್ದೆ ನೀಡುವುದಾಗಿ ವಂಚಕ ₹ 16,992 ಮೊತ್ತವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.</p>.<p>‘ಎರಡು ತಿಂಗಳ ಹಿಂದೆ ಪದ್ಮನಾಭನಗರದ ಎಸ್.ಕಿರಣ್ ಎಂಬುವರಿಗೆ ಕರೆ ಮಾಡಿ ₹ 57 ಸಾವಿರ ಕಿತ್ತಿದ್ದ ವ್ಯಕ್ತಿ ಕೂಡ ತನ್ನ ಹೆಸರನ್ನು ವಿಘ್ನೇಶ್ ಭಟ್ಟಾಚಾರ್ಯ ಎಂದು ಹೇಳಿಕೊಂಡಿದ್ದ.</p>.<p>ಈ ಅಂಶ ಗಳನ್ನು ಗಮನಿಸಿದರೆ, ಒಂದೇ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿರುವುದು ಸ್ಪಷ್ಟ. ಆದರೆ, ಜಾಲದ ಬಗ್ಗೆ ಸಣ್ಣ ಸುಳಿವೂ ಸಿಗುತ್ತಿಲ್ಲ’ ಎಂದು ಸೈಬರ್ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತು ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿರುವ ಹಣಕ್ಕೆ ಗಾಳ ಹಾಕುವ ‘ಬಾಟಮ್ ಫಿಶಿಂಗ್’ ಜಾಲ, ವಿವಿಧ ಆಮಿಷಗಳನ್ನೊಡ್ಡಿ ಮೂರೇ ದಿನಗಳಲ್ಲಿ ನಗರದ 27 ಮಂದಿಯ ಖಾತೆಗಳಿಂದ ಹಣ ಎಗರಿಸಿದೆ.</p>.<p>ವಿಮಾನಯಾನ ಸಂಸ್ಥೆಗಳಲ್ಲಿ ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲವರಿಗೆ ನಂಬಿಸಿದ್ದರೆ, ಮತ್ತೆ ಕೆಲವರಿಗೆ, ‘ನಿಮಗೆ ಬಹುಮಾನ ಲಭಿಸಿದೆ, ಲಾಟರಿ ಗೆದ್ದಿದ್ದೀರ, ಶಾಪಿಂಗ್ ಕೂಪನ್ ಬಂದಿದೆ, ವಿದೇಶ ಪ್ರವಾಸಕ್ಕೆ ಆಯ್ಕೆಯಾಗಿದ್ದೀರ....’ ಎಂಬ ಆಸೆ ತೋರಿಸಿ ಒಬ್ಬೊಬ್ಬರಿಂದ ₹ 10 ಸಾವಿರದಿಂದ ₹ 50 ಸಾವಿರದವರೆಗೆ ಪೀಕಿ<br />ದ್ದಾರೆ. ಅ.24 ರಿಂದ ಅ.26ರ ನಡುವೆಯೇ ‘ಬಾಟಂ ಫಿಶಿಂಗ್’ ವಿರುದ್ಧ 27 ಮಂದಿ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.</p>.<p>ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್), ಐಪಿ ವಿಳಾಸ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಆಧರಿಸಿ ವಂಚಕರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಅವರ ಬಂಧನ ಕಷ್ಟ ಸಾಧ್ಯ ಎಂದೂ ಅವರೇ ಹೇಳುತ್ತಿದ್ದಾರೆ.</p>.<p class="Subhead"><strong>ಏನಿದು ಬಾಟಮ್ ಫಿಶಿಂಗ್?: </strong>ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅಲ್ಪ ಮೊತ್ತದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವುದೇ ಬಾಟಮ್ ಫಿಶಿಂಗ್.</p>.<p>ಈ ಕೃತ್ಯವೆಸಗುವ ವಂಚಕರು ₹1 ಸಾವಿರದಿಂದ ₹50 ಸಾವಿರದ ಒಳಗೆ ಮಾತ್ರ ದೋಚುತ್ತಾರೆ. ಸಣ್ಣ ಪ್ರಮಾಣದಲ್ಲಿ ಹಣ ಕಳೆದು<br />ಕೊಂಡರೆ ನಾಗರಿಕರು ಪೊಲೀಸರಿಗೆ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೂ, ಕಡಿಮೆ ಮೊತ್ತವಾದ ಕಾರಣ ಪೊಲೀಸರು ತನಿಖೆ ನಡೆಸುವುದಿಲ್ಲ ಎಂಬುದು ದಂಧೆಕೋರರ ವಿಶ್ವಾಸ.</p>.<p class="Subhead">ವಿಘ್ನೇಶನ ಹೆಸರಿನಲ್ಲೇ ಕರೆಗಳು: ರಾಮಯ್ಯ ಲೇಔಟ್ನ ಸೋಮ್ಯಾ ಸಿಂಗ್ ಎಂಬ ಯುವತಿಗೆ ಅ.24ರಂದು ಕರೆ ಮಾಡಿರುವ ವ್ಯಕ್ತಿ<br />ಯೊಬ್ಬ, ‘ನನ್ನ ಹೆಸರು ವಿಘ್ನೇಶ್ ಭಟ್ಟಾಚಾರ್ಯ. ನೌಕರಿ ಡಾಟ್ ಕಾಂ ಕಂಪನಿಯ ಸಿಇಒ. ನೀವು ಉದ್ಯೋಗ ಅರಸಿ ಸಲ್ಲಿಸಿರುವ ಅರ್ಜಿ ನೋಡಿದೆ. ಶೈಕ್ಷಣಿಕ ಸಾಧನೆ ಹಾಗೂ ಭವಿಷ್ಯದ ಗುರಿಗಳ ಬಗ್ಗೆ ನೀವು ಹೇಳಿರುವುದು ಇಷ್ಟವಾಯಿತು.</p>.<p class="Subhead">ಹೀಗಾಗಿ, ನಮ್ಮಲ್ಲೇ ಕೆಲಸ ಕೊಡಲು ನಿರ್ಧರಿಸಿದ್ದೇನೆ. ಉದ್ಯೋಗದ ನೋಂದಣಿ ಶುಲ್ಕ, ದಾಖಲೆ ಪರಿಶೀಲನಾ ಶುಲ್ಕ ಹಾಗೂ ತರಬೇತಿ ಶುಲ್ಕವೆಂದು ಕೂಡಲೇ ₹ 31,800 ಪಾವತಿಸಿ’ ಎಂದಿದ್ದ. ಆ ಮಾತುಗಳನ್ನು ಸಂಪೂರ್ಣವಾಗಿ ನಂಬಿದ ಸೋಮ್ಯಾ, ಆ ದಿನವೇ ವಂಚಕನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದಾರೆ. ಹಣ ವರ್ಗಾವಣೆಯಾದ ಕೂಡಲೇ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆ ನಂತರ ಸೋಮ್ಯಾ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದಾರೆ.</p>.<p>ಅದೇ ರೀತಿ ಲಕ್ಕಸಂದ್ರದ ಭವ್ಯಾ ಎಂಬುವರಿಗೂ ವಿಘ್ನೇಶ್ ಎಂಬ ಹೆಸರಿನಿಂದಲೇ ಕರೆ ಬಂದಿದ್ದು, ‘ನೌಕರಿ ಪ್ರೈಮ್ ಕಂಪನಿ’ಯಲ್ಲಿ ಉನ್ನತ ಹುದ್ದೆ ನೀಡುವುದಾಗಿ ವಂಚಕ ₹ 16,992 ಮೊತ್ತವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.</p>.<p>‘ಎರಡು ತಿಂಗಳ ಹಿಂದೆ ಪದ್ಮನಾಭನಗರದ ಎಸ್.ಕಿರಣ್ ಎಂಬುವರಿಗೆ ಕರೆ ಮಾಡಿ ₹ 57 ಸಾವಿರ ಕಿತ್ತಿದ್ದ ವ್ಯಕ್ತಿ ಕೂಡ ತನ್ನ ಹೆಸರನ್ನು ವಿಘ್ನೇಶ್ ಭಟ್ಟಾಚಾರ್ಯ ಎಂದು ಹೇಳಿಕೊಂಡಿದ್ದ.</p>.<p>ಈ ಅಂಶ ಗಳನ್ನು ಗಮನಿಸಿದರೆ, ಒಂದೇ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿರುವುದು ಸ್ಪಷ್ಟ. ಆದರೆ, ಜಾಲದ ಬಗ್ಗೆ ಸಣ್ಣ ಸುಳಿವೂ ಸಿಗುತ್ತಿಲ್ಲ’ ಎಂದು ಸೈಬರ್ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>