ಯಲಹಂಕ ನಿವಾಸಿಯಾದ ಅವರು, ಹುಣಸಮಾರನಹಳ್ಳಿಯ ಟೊಯೊಟಾ ಶೋರೂಂನಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದರು. ಮಂಗಳವಾರ ರಾತ್ರಿ ಪಾಳಿ ಕೆಲಸ ಇದ್ದುದರಿಂದ, 7.30ರ ಸುಮಾರಿಗೆ ಬಸ್ನಲ್ಲಿ ಬಂದು ಎಂವಿಐಟಿ ಕಾಲೇಜು ನಿಲ್ದಾಣದಲ್ಲಿ ಇಳಿದಿದ್ದರು. ಶೋ ರೂಂಗೆ ಹೋಗಲು ರಸ್ತೆ ದಾಟಲು ಮುಂದಾದಾಗ, ಕೆಐಎಎಲ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆಯಿತು ಎಂದು ಚಿಕ್ಕಜಾಲ ಸಂಚಾರ ಪೊಲೀಸರು ಹೇಳಿದರು.