ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ,‘2018ರ ಚುನಾವಣೆಯಲ್ಲಿ ಮುನಿರತ್ನ ಭಾರಿ ಅಕ್ರಮ ಮಾಡಿದ್ದನ್ನು ಬಿಜೆಪಿ ನಾಯಕರೇ ಸಾಕ್ಷಿಸಹಿತ ಬಹಿರಂಗಪಡಿಸಿದ್ದರು. ಆದರೆ, ಮುನಿರತ್ನ ಬಿಜೆಪಿ ಸೇರಿದ ನಂತರ ಬಿಜೆಪಿಯವರು ಪ್ರಕರಣ ಹಿಂಪಡೆದು ಆರೋಪಿಯನ್ನು ರಕ್ಷಿಸಿದ್ದರು. ಅದೇ ರೀತಿ ಈ ಹಗರಣವನ್ನೂ ಮೂಲೆಗುಂಪು ಮಾಡಲು ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ನಡೆಸಲಾಗುವುದು’ ಎಂದೂ ಎಚ್ಚರಿಸಿದರು.