ಬೆಂಗಳೂರು: ಅವಧಿಗೆ ಮುನ್ನವೇ ಡಾ. ಗೋವಿಂದರಾಜು ಮತ್ತು ಪ್ರೇಮ್ ಸೋಹನ್ಲಾಲ್ ಅವರ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವ ರದ್ದುಪಡಿಸಿರುವುದಕ್ಕೆ ಎಬಿವಿಪಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕ್ರಮವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದಸ್ಯತ್ವ ರದ್ದುಪಡಿಸಲು ಇರುವ ಕಾರಣಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರಾಂತ ಕಾರ್ಯದರ್ಶಿ ಭುವನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.