ಕುಮಾರಸ್ವಾಮಿ ಅವರು ಬಜೆಟ್ ಓದಲು ಆರಂಭಿಸಿದರು. ‘ಚುನಾವಣೆಗೆ ಮುನ್ನ ಪರಸ್ಪರ ಸೆಣಸಾಡಿದ ಎರಡು ಪಕ್ಷಗಳು ಫಲಿತಾಂಶದ ನಂತರ ಮೈತ್ರಿ ಸಾಧಿಸಿ, ಸರ್ಕಾರ ರಚಿಸಿರುವುದು ಪ್ರಜಾಪ್ರಭುತ್ವದ ಸೊಬಗು’ ಎಂದು ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಬಣ್ಣಿಸಿದರು. ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದರು.