ಬೆಂಗಳೂರು: ಎಚ್ಎಎಲ್ ಬಳಿಯ ಎಇಸಿಎಸ್ ಬಡಾವಣೆಯಲ್ಲಿ ಕಾಶ್ಮೀರದ ವಿದ್ಯಾರ್ಥಿ ಅಬ್ಸರ್ ಜಾಹೋರ್ ಧರ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
‘ಕುಂದಲಹಳ್ಳಿಯ ನಿವಾಸಿಗಳಾದ ನಿತಿನ್, ಮಂಜೇಶ್, ಗೌತಮ್ ಹಾಗೂ ಅಭಿ ಬಂಧಿತರು. ಆರೋಪಿಗಳಿಂದ ಹಲ್ಲೆಗೀಡಾಗಿರುವ ಅಬ್ಸರ್, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಸಿಎಂಆರ್ಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಬ್ಸರ್, ಇದೇ 19ರಂದು ಕಾಫಿ ಕುಡಿಯಲು ಹೋಗಿದ್ದರು. ಅಲ್ಲಿದ್ದ ಆರೋಪಿಗಳು, ‘ಏನೋ ಯುವತಿಯನ್ನು ಗುರಾಯಿಸುತ್ತಿಯಾ’ ಎಂದು ಜಗಳ ತೆಗೆದಿದ್ದರು. ಮರುದಿನ ಎಇಸಿಎಸ್ ಬಡಾವಣೆಯಲ್ಲಿ ಅಬ್ಸರ್ನನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು’ಎಂದರು.