‘ಜ.20ರಂದು ಮಹೇಶ್ ಅವರು ಜ್ಞಾನಭಾರತಿಯ ಉಪಕಾರ್ ಲೇಔಟ್ನ ಉದ್ಯಾನದಲ್ಲಿ ವಾಯುವಿಹಾರ ನಡೆಸುತ್ತಿದ್ದರು. ಪಾರ್ಕ್ ಎಡಬದಿಯಲ್ಲಿ ನಿಂತಿದ್ದ ಕಾರಿನಲ್ಲಿ ಜೋಡಿಯೊಂದು ಅಸಭ್ಯವಾಗಿ ನಡೆದುಕೊಳ್ಳುತ್ತಿತ್ತು. ಇದನ್ನು ಕಂಡ ಪಿಎಸ್ಐ ಮಹೇಶ್, ಆ ಜೋಡಿಗೆ ಬುದ್ಧಿಹೇಳಲು ಮುಂದಾಗಿದ್ದಾರೆ. ಆಗ ಕಾರಿನಲ್ಲಿದ್ದ ಯುವಕ, ಹಿಂದಿನ ಸೀಟಿನಿಂದ ಮುಂದಕ್ಕೆ ಬಂದು ಏಕಾಏಕಿ ಕಾರು ಚಲಾಯಿಸಿದ್ದಾನೆ. ಕಾರಿನ ಮುಂಭಾಗದಲ್ಲಿ ನಿಂತಿದ್ದ ಮಹೇಶ್ ಆತಂಕಗೊಂಡು, ಬಾನೆಟ್ ಮೇಲೆ ಹತ್ತಿದ್ದರು. ಕಾರು ನಿಲ್ಲಿಸುವಂತೆ ಸೂಚಿಸಿದ್ದರೂ ಚಾಲಕ, ವೇಗವಾಗಿ ರಿವರ್ಸ್ ಗೇರ್ ಹಾಕಿ ಕೆಳಕ್ಕೆ ಬೀಳಿಸಲು ಪ್ರಯತ್ನಿಸಿದ್ದ. ಕೆಳಕ್ಕೆ ಬಿದ್ದ ಮಹೇಶ್ ಅವರ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಾಯವಾಗಿತ್ತು’ ಎಂದು ಮೂಲಗಳು ಹೇಳಿವೆ.