‘ಯುವಕರ ಸ್ಕೂಟರ್, ಸಿಂಗಾರವೇಲ್ ಅವರ ವಾಹನ ಬಳಿಯೇ ವೇಗವಾಗಿ ಹೋಗಿತ್ತು. ಗಾಬರಿಗೊಂಡು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ್ದ ಸಿಂಗಾರವೇಲ್, ‘ನಿಧಾನವಾಗಿ ವಾಹನ ಓಡಿಸಿ’ ಎಂದು ಯುವಕರಿಗೆ ಬುದ್ದಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಹೆಲ್ಮೆಟ್ ಕಿತ್ತುಕೊಂಡು ಮುಖಕ್ಕೆ ಹೊಡೆದಿದ್ದರು. ಚಾಕುವಿನಿಂದ ಕೈಗೆ ಇರಿದು ಬೆರಳಿಗೆ ಗಾಯವನ್ನುಂಟು ಮಾಡಿದ್ದರು.’