ಇದೇ ವೇಳೆ ಪ್ರೊ. ಸಮತಾ ಬಿ ದೇಶಮಾನೆ ಬರೆದ ವಿಶ್ವ ದಾಖಲೆಯ ಸೋಲಿಲ್ಲದ ಸರದಾರ ಸಮಾಜ ವಿಜ್ಞಾನಿ ಜಗಜೀವನರಾಮ್ ಪುಸ್ತಕವನ್ನು ಕುಲಪತಿ ಡಾ.ಜಯಕರ್ ಹಾಗೂ ನಿಕಟಪೂರ್ವ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಬಿಡುಗಡೆ ಮಾಡಿದರು. ಹಣಕಾಸು ಅಧಿಕಾರಿ ಎಸ್. ಅಜಿತ್ ಕುಮಾರ್ ಹೆಗಡೆ, ಸಿಂಡಿಕೇಟ್ ಸದಸ್ಯ ಸುಧಾಕರ್, ಕುಲ ಸಚಿವ (ಮೌಲ್ಯ ಮಾಪನ) ಡಾ.ಜೆ.ಟಿ.ದೇವರಾಜ್, ಡಾ.ಬಾಬು ಜಗಜೀವನರಾಮ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಡಾ.ಬಿ.ಗಂಗಾಧರ್, ನಿಕಟ ಪೂರ್ವ ಸಿಂಡಿಕೇಟ್ ಸದಸ್ಯ ಸಿಂಹ, ಎಇಇ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.