ನಂತರ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಜ್ಞಾನ ಮತ್ತು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ದಾವಣಗೆರೆಯಲ್ಲಿ ವಿಟಿಯುನ ಸ್ಟಾರ್ಟ್ಅಪ್ ಕ್ಯಾಂಪಸ್ ಪ್ರಾರಂಭವಾಗಲಿದೆ. ಪದವೀಧರರನ್ನು ಉದ್ಯಮಿಗಳನ್ನಾಗುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಇದರಿಂದ, ಅವರು ಉದ್ಯೋಗವನ್ನು ಹುಡುಕುವ ಬದಲು ಉದ್ಯೋಗವನ್ನು ಸೃಷ್ಟಿಸಬಹುದು’ ಎಂದು ಹೇಳಿದರು.