ಬನಶಂಕರಿ ಕುಲಕರ್ಣಿ, ಶೈನಾ ಶ್ರೀನಿವಾಸ ಶೆಟ್ಟಿ, ರೋಹಿಣಿ ರಂಗನಾಥನ್ ಮತ್ತು ಕೆ.ವಿ. ಕಸ್ತೂರಿ ರಾಮ್ ತಮ್ಮ ಅನುಭವಗಳನ್ನು ಈ ಗೋಷ್ಠಿಯಲ್ಲಿ ಹಂಚಿಕೊಂಡರು. ಇವರೆಲ್ಲರೂ ತಾವು ಬರೆದ ಕಾದಂಬರಿ, ಕಥೆ, ಕವನಗಳನ್ನು ‘ಪ್ರತಿಲಿಪಿ’ ಎನ್ನುವ ಡಿಜಿಟಲ್ ವೇದಿಕೆಯ ಮೂಲಕ ಪ್ರಕಟಿಸಿದ್ದಾರೆ. ಲಕ್ಷಗಟ್ಟಲೆ ಓದುಗರನ್ನೂ ಹೊಂದಿದ್ದಾರೆ.