‘ರಾಜಾರಾಮ್ ಅವರು ಸಾರಾಯಿಪಾಳ್ಯದಲ್ಲಿ ಸ್ನೇಹಿತರೊಬ್ಬರ ಜೊತೆಯಲ್ಲಿ ‘ಅಂಬಿಕಾ ಗ್ಲಾಸ್ ಆ್ಯಂಡ್ ಪ್ಲೇವುಡ್’ ಪೀಠೋಪಕರಣ ತಯಾರಿಕೆ ಉದ್ಯಮ ನಡೆಸುತ್ತಿದ್ದಾರೆ. ಕಂಪನಿಯ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ಖಾತೆ ಹೊಂದಿದ್ದಾರೆ. ಜುಲೈ 27ರಂದು ರಾಜಾರಾಮ್ ಅವರನ್ನು ಭೇಟಿಯಾಗಿದ್ದ ಮಹೇಶ್ ಕುಮಾರ್, ‘ನಾನು ಐಡಿಎಫ್ಸಿ ಬ್ಯಾಂಕ್ ಅಧಿಕಾರಿ. ನಿಮಗೆ ₹ 50 ಲಕ್ಷ ಸಾಲ ಮಂಜೂರು ಮಾಡಿಸಿಕೊಡುತ್ತೇನೆ’ ಎಂದು ಹೇಳಿದ್ದ.’