‘ನಾವು ಹಾನಗಲ್ ನಿವಾಸಿಗಳು. ಹಿಂದೆ ಗ್ರಾಮೀಣ ಭಾಗದಲ್ಲಿ ಸಂಚರಿಸಿ ರಾಮಾಯಣ, ಮಹಾಭಾರತ ಮತ್ತಿತರ ಪೌರಾಣಿಕ ಪಾತ್ರಗಳ ವೇಷ ತೊಟ್ಟು ಆದಾಯ ಕಂಡುಕೊಳ್ಳುತ್ತಿದ್ದೇವು. ಒಂದೊಂದು ಗ್ರಾಮದಲ್ಲಿ ವಾರಗಟ್ಟೆಲೇ ಇದ್ದು, ರಂಜಿಸುತ್ತಿದ್ದೆವು. ಈ ಕಾಯಕ ಈಗ ನಮ್ಮವರಿಗೇ ಬೇಡವಾಗಿದೆ’ ಎಂದು ಹಗಲು ವೇಷಧಾರಿ ಗುಂಪಿನ ಹಿರಿಯ ಕಲಾವಿದ ಹಾನಗಲ್ನ ಚಿನ್ನಸ್ವಾಮಿ ಮಹಾಂತ್ ಬೇಸರ ವ್ಯಕ್ತಪಡಿಸುತ್ತಾರೆ.